ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ನಡೆಯುವ ‘ಬೆಂಗಳೂರು ಸಾಹಿತ್ಯ ಉತ್ಸವ-2018’ರಲ್ಲಿ ಇಂಗ್ಲೀಷ್ ಲೇಖಕ ಹಾಗೂ ಅಂಕಣಕಾರ ಚೇತನ್ ಭಗತ್ ಭಾಗಿಯಾಗ್ತಿಲ್ಲ ಅಂತಾ ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಚೇತನ್ ಭಗತ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಅಂತಾ ಆಯೋಜಕರು ಅಧಿಕೃತವಾಗಿ ಘೋಷಣೆ ಮಾಡದೆ ಇದ್ರೂ, ತಮ್ಮ ಹೊಸ ಕಾದಂಬರಿ ‘ದಿ ಗರ್ಲ್ ಇನ್ ರೂಮ್ 105’ ಪುಸ್ತಕದ ಪ್ರಚಾರಕ್ಕಾದರೂ ಬರ್ತಾರೆ ಎಂದು ಹೇಳಲಾಗ್ತಿತ್ತು.
ಕಳೆದೊಂದು ವಾರದಿಂದ ಚೇತನ್ ಭಗತ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರ್ತಿದ್ದು, ಅನೇಕ ಮಹಿಳೆಯರು ಸೋಷಿಯಲ್ ಮಿಡಿಯಾದಲ್ಲಿ ಚೇತನ್ ವಿರುದ್ಧ ತಿರುಗಿಬಿದ್ದಿದ್ರು. ಹೀಗಾಗಿ ಚೇತನ್ ಭಗತ್ರನ್ನ ಆಯೋಜಕರು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಈ ಎಲ್ಲಾ ಗಾಳಿ ಮಾತುಗಳಿಗೂ ತೆರೆ ಎಳೆದಿರುವ ಕಾರ್ಯಕ್ರಮದ ಆಯೋಜಕರು, ಅವರ ಮೇಲೆ ಅಪಾದನೆಗಳು ಇರೋದ್ರಿಂದ ಕರೆದಿಲ್ಲ ಅಂತಾ ಹೇಳೋದೆಲ್ಲ ಸುಳ್ಳು. ಚೇತನ್ ಭಗತ್ ಮೂರು ತಿಂಗಳಿಂದ ನಮ್ಮ ಸಂಪರ್ಕದಲ್ಲಿದ್ದಾರೆ. ಬಿಡುವಿಲ್ಲದ ಕೆಲಸಗಳ ನಡುವೆ ಸಿಲುಕಿರುವುದರಿಂದ ಅವರು ಈ ಬಾರಿ ಕಾರ್ಯಕ್ರಮಕ್ಕೆ ಬರ್ತಿಲ್ಲ ಅಂತಾ ಹೇಳಿದ್ದಾರೆ.
ಇನ್ನು ಈ ಬೆಂಗಳೂರು ಸಾಹಿತ್ಯ ಉತ್ಸವ ಅಕ್ಟೋಬರ್ 27 ಹಾಗೂ 28ರಂದು ನಗರದ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆಯಲಿದ್ದು, ದೇಶದ 150ಕ್ಕೂ ಹೆಚ್ಚು ಪ್ರಸಿದ್ಧ ಬರಹಗಾರರು ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv